Featured posts

ಹೊಸಂಗಡಿ ಬಸ್ ನಿಲ್ದಾಣ ನಿರ್ಲಕ್ಷ್ಯ: ಹೆದ್ದಾರಿಯಲ್ಲೇ ಬಸ್ ನಿಲುಗಡೆ, ಅಪಘಾತ ಭೀತಿ ಹೆಚ್ಚಳ

​ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ಹೃದಯಭಾಗವಾದ ಹೊಸಂಗಡಿಯಲ್ಲಿ ಸುಸಜ್ಜಿತ…
Read More

ಹೊಸಂಗಡಿ ಬಸ್ ನಿಲ್ದಾಣ ನಿರ್ಲಕ್ಷ್ಯ: ಹೆದ್ದಾರಿಯಲ್ಲೇ ಬಸ್ ನಿಲುಗಡೆ, ಅಪಘಾತ ಭೀತಿ ಹೆಚ್ಚಳ

​ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ಹೃದಯಭಾಗವಾದ ಹೊಸಂಗಡಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿದ್ದರೂ, ಅದರ ಸರಿಯಾದ ಬಳಕೆ ಆಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ನಿಲ್ದಾಣವಿದ್ದರೂ, ಬಸ್ಸುಗಳು ನಿಲ್ದಾಣದಲ್ಲಿ ನಿಲ್ಲಿಸದೆ ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿ-ಇಳಿಸುತ್ತಿರುವುದು ಸಂಚಾರ ದಟ್ಟಣೆ ಮತ್ತು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ​​ ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ (ಕರ್ನಾಟಕ ಮತ್ತು ಕೇರಳ) ಹಾಗೂ ಖಾಸಗಿ ಬಸ್ಸುಗಳು ನಿಗದಿತ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಳಿಸುವ ಬದಲು, ಹೆದ್ದಾರಿಯ ತಿರುವುಗಳಲ್ಲೇ…

Read More

ಆಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ

ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮತ್ತು ಕನ್ನಡದ ಲೇಖಕರೂ ಆಗಿರುವ ನಿತ್ಯಾನಂದ ಬಿ ಶೆಟ್ಟಿಯವರು ಒಂದು ಅದ್ಭುತವಾದ ಪುಸ್ತಕ ಬರೆದಿದ್ದಾರೆ.ಆ ಕೃತಿಯ ಹೆಸರು ಆಳವು ಅರಿಯದ ಭಾಷೆ – ಕಲೆ,ಸಮಾಜ, ಇತಿಹಾಸ. ಒಂದು ಕಾದಂಬರಿಯಂತೆ, ಕುತೂಹಲ ಹುಟ್ಟಿಸುತ್ತ ಓದಿಸಿಕೊಂಡು ಹೋಗುವ ಇಂತಹ ಒಂದು ಸಂಶೋಧನಾ ಕೃತಿ ಕನ್ನಡದಲ್ಲಂತೂ ಪ್ರಾಯಶಃ ಇದೇ ಮೊದಲು. ಓದು-ಬರಹ ಬಲ್ಲ ಸಾಮಾನ್ಯರಿಂದ ತೊಡಗಿ, ಮಹಾನ್ ಪಂಡಿತರನ್ನೂ ಏಕಕಾಲಕ್ಕೆ ಆವರಿಸಬಲ್ಲ ಪುಸ್ತಕ ಇದು.‌ ಈ ಪುಸ್ತಕದ ಪ್ರತಿಯೊಂದು ಪದ, ಪ್ರತಿ ಸಾಲು ಓದುಗರನ್ನು ಹೇಗೆ ಹಿಡಿದಿಡುತ್ತದೆಯೆಂದರೆ…

Read More

ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನಾಚರಣೆ: ‘ಲೀನ್‌ಸ್ಪಾರ್ಕ್’ ಪುಸ್ತಕ ಬಿಡುಗಡೆ

ಬೆಂಗಳೂರು: ನಗರದ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ (SJU) ಏಪ್ರಿಲ್ 11, 2026 ರಂದು ಸಂಸ್ಥೆಯ ನಾವೀನ್ಯತೆ ಮಂಡಳಿಯ (IIC) ವತಿಯಿಂದ ‘ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಜೇವಿಯರ್ ಹಾಲ್‌ನಲ್ಲಿ ನಡೆದ ಈ ಉನ್ನತ ಮಟ್ಟದ ಕಾರ್ಯಕ್ರಮವು ವಿಶ್ವವಿದ್ಯಾಲಯವನ್ನು ದಾರ್ಶನಿಕ ಚಿಂತನೆಯ ಕೇಂದ್ರವಾಗಿ ಮಾರ್ಪಡಿಸಿತ್ತು. ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮ ತಜ್ಞರ ವೈವಿಧ್ಯಮಯ ಗುಂಪನ್ನು ಆಕರ್ಷಿಸಿದ ಈ ಸಮಾವೇಶವು, “ಮಿತವ್ಯಯದ ಮತ್ತು ಸರಳ ಚಿಂತನೆ”ಯ ಮೂಲಕ ಶೈಕ್ಷಣಿಕ ಸಿದ್ಧಾಂತವನ್ನು ನೈಜ-ಪ್ರಪಂಚದ ಅನ್ವಯದೊಂದಿಗೆ ಬೆಸೆಯುವ…

Read More

ಸಮಸ್ಯೆಗಳನ್ನು ಸವಾಲಾಗಿ ಸ್ಚೀಕರಿಸಿದ ಅಂಬೇಡ್ಕರ್: ಸಂಸದ ಚೌಟ

ಮಂಗಳೂರು: ಬಾಲ್ಯದಿಂದಲೇ ಸಮಸ್ಯೆಗಳನ್ನು ಎದುರಿಸುತ್ತಾ ಬಂದು, ಅದನ್ನೇ ಸವಾಲಾಗಿ ಸ್ವೀಕರಿಸಿದ ಧೀಮಂತ ವ್ಯಕ್ತಿ ಡಾ. ಬಿ ಆರ್ ಅಂಬೇಡ್ಕರ್ ಆಗಿದ್ದಾರೆ ಎಂದು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಅವರು ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಆಡಳಿತದ ನೀತಿ ನಿರೂಪಣೆಯಲ್ಲಿ ಮಹಿಳೆಯರು, ದುರ್ಬಲರು ಭಾಗವಹಿಸಬೇಕೆಂಬುದು ಅಂಬೇಡ್ಕರ್ ಕನಸಾಗಿತ್ತು. ಇದನ್ನು ಈಡೇರಿಸಲು…

Read More

ಬೈಂದೂರು ಸರಕಾರಿ ಶಾಲೆಗೆ ಎಐ ಶಿಕ್ಷಕಿ: ಶಿಕ್ಷಣದಲ್ಲಿ ಮೌನ ಕ್ರಾಂತಿ

ಉಡುಪಿ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕು ಹಾಗು ಹೆಚ್ಚು‌ ಗ್ರಾಮೀಣ ಪ್ರದೇಶವನ್ನು ಹೊಂದಿರುವ ಬೈಂದೂರು ತಾಲೂಕು ಮೌನಕ್ರಾಂತಿಯೊಂದನ್ನು ಮಾಡಿದೆ. ಬೈಂದೂರು ತಾಲೂಕಿನ ಸರಕಾರಿ ಶಾಲೆಗೆ ಕೃತಕ ಬುದ್ದಿಮತ್ತೆಯ ಟೀಚರ್ ಬಂದಿದ್ದಾರೆ. ಈ ಕುರಿತ ಸ್ಟೋರಿ ಇದು… ರಾಜ್ಯದ ಉಳಿದ ಶಾಲೆಗಳು ಮೂಗಿನ ಮೇಲೆ ಬೆರಳಿಡುವ ಕೆಲಸ ಬೈಂದೂರು ತಾಲೂಕು ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಹಾಗೂ ತಂತ್ರಜ್ಞಾನ ಆಧಾರಿತ ನವೀನ ಸಾಧನಗಳ ಮೂಲಕ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಬೈಂದೂರು ವಲಯದ ವಂಡ್ಸೆ ಸರಕಾರಿ…

Read More

ವಿಷು ಕಣಿಯ ದರ್ಶನ ಪಡೆದ ಭಕ್ತರು: ಶ್ರೀ ಮುತ್ತಪ್ಪನ್ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಂಗಳೂರು: ವಿಷು ಹಬ್ಬವು ದಕ್ಷಿಣ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದು .ಈ ಹಬ್ಬವನ್ನು ಕೇರಳ ಮತ್ತು ತುಳುನಾಡಿನ ಭಾಗದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತದೆ. ವಿಷು ಹಬ್ಬದ ಪ್ರಮುಖ ವಿಶೇಷವೆಂದರೆ ವಿಷು ಕಣಿ. ಬೆಳಿಗ್ಗೆ ಎದ್ದ ತಕ್ಷಣ ದೇವರ ಮುಂದೆ ಇಡಲಾಗಿರುವ ಹಣ್ಣುಗಳು, ಹೂವುಗಳು, ಕನ್ನಡಿ, ನಾಣ್ಯಗಳು ಮತ್ತು ಶ್ರೀಕೃಷ್ಣನ ಮೂರ್ತಿಯನ್ನು ನೋಡುವುದು ಶುಭಕರವೆಂದು ನಂಬಲಾಗುತ್ತದೆ. ಈ ಸಂಪ್ರದಾಯವು ಮುಂದಿನ ವರ್ಷದ ಜೀವನ ಸಮೃದ್ಧಿಯಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತದೆ. ಹಬ್ಬದ ಸಂದರ್ಭದಲ್ಲಿ ಹಿರಿಯರು ಕಿರಿಯರಿಗೆ ವಿಷುಕೈನೀಟಂ ಎಂಬ ಹೆಸರಿನಲ್ಲಿ ಹಣ…

Read More

ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ಅಡುಗೆ ಅನಿಲದ ಬೆಲೆ ಏರಿಕೆ ಹಾಗೂ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯವನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ನಗರದ ಕದ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಖಾಲಿ ಗ್ಯಾಸ್ ಸಿಲಿಂಡರ್‌ಗೆ ಹೂಮಾಲೆ ಹಾಕಿ ಅದನ್ನು ಚಟ್ಟದ ಮೇಲೆ ಕಟ್ಟಿ ಹೊತ್ತುಕೊಂಡು ಅಣಕು ಶವಯಾತ್ರೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ಅಲ್ಲದೆ ಗ್ಯಾಸ್ ಸ್ಟೌ ಹಾಗೂ ಖಾಲಿ ಪಾತ್ರೆಗಳನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ…

Read More

ಪಜಿಂಗಾರ್ ಸಾಲಿಯಾನ್ ಕುಟುಂಬದಲ್ಲಿ ಧಾರ್ಮಿಕ ವೈಭವ: ಗ್ರಹಪ್ರವೇಶ, ಕೋಲ ಸೇವೆ ಸಂಪನ್ನ

ಮೂಡಂಬೈಲ್ ಪಜಿಂಗಾರ್ ಸಾಲಿಯಾನ್ ಕುಟುಂಬದ ನೂತನ ತರವಾಡಿನ ಗ್ರಹಪ್ರವೇಶ, ಬ್ರಹ್ಮಕಲಶ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮಗಳು ಏಪ್ರಿಲ್ 12ರಂದು ಭಕ್ತಿಶ್ರದ್ದೆಯಿಂದ ನೆರವೇರಿದವು. ಕಾರ್ಯಕ್ರಮದ ಪೂರ್ವಭಾವಿಯಾಗಿ ಏಪ್ರಿಲ್ 11ರಂದು ತಂತ್ರಿಗಳ ಉಪಸ್ಥಿತಿಯಲ್ಲಿ ಸ್ಥಳ ಶುದ್ಧಿ, ಪುಣ್ಯಹ ವಚನ, ಕಲಶ ಶುದ್ಧಿ, ವಾಸ್ತು ಹೋಮ ಹಾಗೂ ವಾಸ್ತು ಬಲಿ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆಯಿತು. ಏಪ್ರಿಲ್ 12ರಂದು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲ ಕೃಷ್ಣ ತಂತ್ರಿಯವರ ಸಾನ್ನಿಧ್ಯದಲ್ಲಿ ಬೆಳಗ್ಗೆ 8:45ಕ್ಕೆ ಗ್ರಹಪ್ರವೇಶ ಮತ್ತು ಮಹಾ ಪೂಜೆ ನೆರವೇರಿತು. ಮಧ್ಯಾಹ್ನ ಮಲರಾಯ ದೈವದ ನೇಮ,…

Read More

ಸೌದಿ ಅರೇಬಿಯಾ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರಾಯಭಾರಿ ಡಾ. ಸುಹೇಲ್ ಐಜಾಝ್ ಖಾನ್ ಅವರೊಂದಿಗೆ ಝಕರಿಯಾ ಜೋಕಟ್ಟೆ ಸಭೆ

ರಿಯಾದ್: ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಚರ್ಚಿಸಲು, ಸೌದಿ ಅರೇಬಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ರಾಯಭಾರಿಯಾಗಿರುವ ಡಾ. ಸುಹೇಲ್ ಐಜಾಝ್ ಖಾನ್ ಅವರೊಂದಿಗೆ ಝಕರಿಯಾ ಜೋಕಟ್ಟೆ ಗೌರವಪೂರ್ವಕ ಸಭೆ ನಡೆಸಿದರು. ಭಾರತೀಯ ಸಮುದಾಯದ ಹಕ್ಕುಗಳು, ಸುರಕ್ಷತೆ ಹಾಗೂ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ಈ ವೇಳೆ ಅಲ್ ಮುಝೈನ್ ಕಂಪನಿಯ ಸಿಇಒ ಝಕರಿಯಾ ಜೋಕಟ್ಟೆ, ಉದ್ಯಮಿ ಅಯಾಜ್…

Read More

ಹಾರ್ಮುಜ್ ತಣಾವಣೆ ತೀವ್ರ: ಬಂದರುಗಳ ಮೇಲೆ ದಾಳಿ ಎಚ್ಚರಿಸಿದ ಇರಾನ್

ಟೆಹ್ರಾನ್: ಕದನ ವಿರಾಮ ಒಪ್ಪಂದಕ್ಕೆ ಬರಲು ವಿಫಲವಾದ ಹಿನ್ನೆಲೆ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ದಿಗ್ರಂಧನ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ, ಇರಾನ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿ ಪ್ರದೇಶದ ಯಾವುದೇ ಬಂದರುಗಳ ಮೇಲೂ ಯಾವ ಕ್ಷಣದಲ್ಲಾದರೂ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಇರಾನ್ ಎಚ್ಚರಿಸಿದೆ. ಅಮೆರಿಕದ ದಿಗ್ರಂಧನ ಬೆದರಿಕೆಯನ್ನು ಕಟುವಾಗಿ ಟೀಕಿಸಿದ ಇರಾನ್, ಇಂತಹ…

Read More
error: Content is protected !!